ಕ್ಷಾಮ

ಇತಿಯೋಪಿಯಾದಲ್ಲಿ ಕ್ಷಾಮ ಬಂದು
ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು
ಬೆಳಗ್ಗಿನ ಕಾಫಿ ಹೀರುತ್ತ
ಪತ್ರಿಕೆಯಲ್ಲಿ ಓದಿ

ಕೇಳಿದೆಯೇನೆ ಸುದ್ದಿ
ಎಂದು ಉದ್ಗರಿಸಲಿಲ್ಲ.
ದೇವರಿಗೆ ದೀಪ ಹಚ್ಚಿ ನೀನು
ಪ್ರಾರ್ಥಿಸುತ್ತಿದ್ದುದು ಏನು
ಎಂದು ಕೇಳಲಿಲ್ಲ.

ಮನೆಯೆದುರಿನ ಆಲದ ಮರದಿಂದ ಕಾಗೆಗಳು
ಹಾರಿ ಹೋದುವು ಸದ್ದಿಲ್ಲದೆ.
ಇದು ಸಂಶೋಧಕರ ಗಮನಕ್ಕೆ ಬಂದಾಗ
ಯಾರೂ ಬದುಕಿರಲಿಲ್ಲ.

ಈ ಗ್ರಾಮ ನೀರಿಲ್ಲದೆ ಸತ್ತಿತು.
ನೀರಿಗಾಗಿ ಹೋದವರು
ದಾರಿಯಲ್ಲಿ ಬಿದ್ದರು.  ಕೊಡಗಳ ಚೂರು
ಅಲ್ಲಲ್ಲಿ ಒಂದೆರಡು ಎಲುಬುಗಳ ತುಂಡು
ಮತ್ತೆ ಇವರ ಕಣ್ಣುಗಳೇನಾದವೋ
ಯಾರಿಗೂ ತಿಳಿಯದು.

ಸೂರ್ಯಕಾಂತಿಗೆ ಮಣ್ಣುನೀರುಬೇಕು
ಅಳುವುದಕ್ಕಾದರೂ ಕಣ್ಣುಬೇಕು
ಬೆಂಗಾಡಿನಲ್ಲೇನು ಸಾವುನೋವು
ಸತ್ತಮೇಲೇನು ಮತ್ತೆ ಸಾವು

ಇದು ಮೊತ್ತಮೊದಲು ವಿಮಾನಪ್ರಯಾಣಿಕರ ದೃಷ್ಟಿಗೆ ಬಿತ್ತು
ಕೆಳಗೆ ಹದ್ದುಗಳು ಎರಗುವುದನ್ನು ಇವರು ಗಮನಿಸಿದರು
ಮರಣದ ವಾಸನೆ ಎಷ್ಟು ದೂರ ಹೊಡೆದೀತು
ಇಡೀ ಗ್ರಾಮವೇ ನಾಶವಾದಮೇಲೆ

ಮುಸುಲೊನಿಯೂ ಒಮ್ಮೆ ಹೀಗೆ ಎರಗಿದ್ದನಲ್ಲ
ಅದೊಂದು ಇತಿಹಾಸ.  ಇದು
ಅದರ ಪರಿಹಾಸ.  ಹೀಗೆ
ಕುರುಡು ರಾಜ್ಯದ ಕಣ್ಣುಗುಂಡಿಗಳಲ್ಲಿ
ಕಂಡುಕಾಣದ ಕತೆಗಳು
ಮರುಕಳಿಸುವ ವ್ಯಥೆಗಳು

ಆದರೆ ಇದೀಗ ಬಿಸಿಲ ಬೇಗೆ ನನ್ನ ಮುಖಕ್ಕೇ ಹೊಡೆಯುತ್ತಿದೆ
ನೋಡಲಾರೆ ಹೊರಕ್ಕೆ
ಹೊರಟಿದ್ದಾಳೆ ಈಕೆ ನೀರಿಗೆಂದು
ದೂರದ ಬಾವಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಷ್ಟ ಪಾಡ್ಯದ ಚಂದ್ರ
Next post ಹುನ್ನಾರ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys